ചരിത്രത്തിലാദ്യമായി SSLC പരീക്ഷയില്‍ അഡൂര്‍ സ്കൂളിന് 100% വിജയം...25 ഫുള്‍ എ പ്ലസ്...11 ഒന്‍പത് എ പ്ലസ്...ഏവര്‍ക്കും അഡൂര്‍ സ്കൂളിന്റെയും മലയോരവിശേഷത്തിന്റെയും സ്വാതന്ത്ര്യദിനാശംസകള്‍
SCHEME OF WORK 2019-20
LSS/USS RESULT 2020SSLC RESULT 2021SSLC Result Analysis 2021
Showing posts with label KANNADA. Show all posts
Showing posts with label KANNADA. Show all posts
"ಮಾನವನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಭೂಮಿಗಿದೆ. ಆದರೆ ಅವನ ದುರಾಸೆಗಳನ್ನಲ್ಲ" ಮಾತು ಪ್ರಾನ್ಸ್ ನ ಬೇಕನ್ ಎಬ ತತ್ವಜ್ಞಾನಿಯ ಮಾತು ಮನುಷ್ಯನ ಅಂತರಾಳವನ್ನು ಹೊಕ್ಕಿಲ್ಲ. ಪ್ರಾಕೃತಿಕ ಅಸಮತೋಲನಕ್ಕೆ ಮಾನವನ ದುರಾಸೆಯೇ ಮೂಲ ಕಾರಣವಾಗಿದೆ. ಹಣದ ಆಸೆಗೋಸ್ಕರ ಹಣದ ಬೆನ್ನು ಹತ್ತುತ್ತಿರುವ ಮಾನವ ಪ್ರಕೃತ್ತಿಯನ್ನು ನಾಶಗೈಯುತ್ತಾ ಅಟ್ಟಹಾಸ ಮೆರೆಯುತ್ತಿದ್ದಾನೆ. ಗಣಿಗಾರಿಕೆ, ಮರಳುದಂಧೆ, ಅರಣ್ಯಲೂಟಿ, ನೀರಿನ ಮಾರಾಟ, ಇವುಗಳನ್ನೆಲ್ಲಾ ಉಪಯೋಗಿಸಿಕೊಂಡು ಪ್ರಕೃತ್ತಿಯ ವಿನಾಶಕ್ಕೆ ಕಾರಣವಾಗುತ್ತಾನೆ. ನಮ್ಮ ಸುಸ್ಥಿರ ಬದುಕಿಗೆ ಪರಿಸರವಲ್ಲವೇ ಅಡಿಪಾಯ ?

ಪರಿಸರದಲ್ಲಿ ಒಂದಾಗಿರುವ ಮನುಷ್ಯರು ಪರಿಸರವಿದ್ದರೆ ಜೀವಿಸಬಹುದು. ಪರಿಸರವೇ ಇಲ್ಲದಿದ್ದರೆ ಅವರಿಗೆ ಜೀವಿಸಲು ಸಾದ್ಯವಿಲ್ಲ. ಮರಗಿಡಗಳನ್ನು ಕಡಿದರೆ ಮೊದಲ ಹಾನಿ ಪ್ರಾಣಿ ಪಕ್ಷಿಗಳಿಗೆ, . ಬಳಿಕ ಆ ಹಾನಿ ಮನುಷ್ಯರಿಗೆ ತಟ್ಟುತ್ತದೆ.

ಹೃದಯ ಸ್ಪರ್ಶಿ ವಿದಾಯಕೂಟ

ಅಡೂರು ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವ ವ್ಯಕ್ತಿಯನ್ನು ಸಮಾಜ ಗೌರವಿಸುತ್ತದೆ. ಉದ್ಯೋಗದಿಂದ ವರ್ಗಾವಣೆ ಗೊಂಡರೂ , ನಿವೃತ್ತರಾದರೂ, ಅಂಥ ಉದ್ಯೋಗಿಗಳನ್ನು ಜನರು ನೆನೆಪಿಸಿಕೊಳ್ಳುತ್ತಾರೆ. ಎದು ಚನಿಯ ಮಾಸ್ತರರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಶ್ರೀ ಬಾಲಕೃಷ್ಣ ಶೆಟ್ಟಿಗಾರರು ಹೇಳಿದರು.ಅಡೊರು ಹಿರಿಯ ಪ್ರೌಢಶಾಲೆಯಿಂದ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ನಿರ್ಗಮಿಸಿದ ಚೆನಿಯ ನಾಯ್ಕರನ್ನು   ಶಾಲೆಯಲ್ಲಿ ಹೃದಯ ಸ್ಪರ್ಶಿ ಸಮಾರಂಭದಲ್ಲಿ ಬೀಳ್ಕೊಡಲಾಯಿತು.
        ಹಿರಿಯ ಶಿಕ್ಷಕಿ ಶ್ರೀಮತಿ ಪ್ರಸನ್ನ ಕುಮಾರಿಯವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶ್ರೀ ರಾಮಣ್ಣ ಮಾಸ್ಟರ್, ಶ್ರೀ ಮತಿ ಪದ್ಮಾ ಯಚ್, ಶ್ರೀ ಕೃಷ್ಣಪ್ಪ ಮಾಸ್ತರ್, ಮೊದಲಾದರವರು ಶುಭಾಶಂಸನೆ ಮಾಡಿದರು.
      ಶಾಲಾ ಸಿಬ್ಬಂದಿ ಸಂಘದ ಕಾರ್ಯದರ್ಶಿ ಶ್ರೀ ಅಬ್ದುಲ್ ಸಲಾಂ ರವರು ಸ್ವಾಗತಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಶ್ರೀ ಸತ್ಯಶಂಕರರು ಧನ್ಯವಾದ ಸಮರ್ಪಿಸಿದರು.
ವಿದ್ಯೆಯ ಕಲಿತು ದೊಡ್ಡವಳಾಗಿ
ಕವಿತೆಯ ನಾನು ರಚಿಸುವೆನು
ಅಂದದ ಚಂದದ ಹಾಡನು ಬರೆದು
ಜನಗಳ ಮೆಚ್ಚುಗೆ ಪಡೆಯುವೆನು || ವಿದ್ಯೆಯ ||
ಹಿರಿಯರು ಹೇಳಿದ ನೀತಿಯ ಮಾತನು
ಒಂದೊಂದಾಗಿ ತಿಳಿಯುವೆನು
ತಂದೆ ತಾಯಿಗಳು ದೇವರು ಎ೦ಬ
ಮಮತೆಯ ನುಡಿಯನು ಅರಿಯುವೆನು || ವಿದ್ಯೆಯ ||
ಗುರುಗಳು ಹೇಳಿದ ಪಾಠವ ಕಲಿತು
ವಿದ್ಯಾವಂತೆ ಎ೦ದೆನಿಸುವೆನು
ನಿಸರ್ಗ ನೀಡುವ ಚೆಲುವನು ಕಂಡು
ಕವನವ ನಾನು ಬರೆಯುವೆನು || ವಿದ್ಯೆಯ ||
ದೇಶದ ಜನರೆಲ್ಲರು ಮೆಚ್ಚುವ
ಕವಿಯು ನಾನಾಗುವೆನು || ವಿದ್ಯೆಯ ||
ಅರ್ಥ
ಮಾತನಾಡುವ ಮಾತಿಗಿರಲಿ ಒಂದು ಅರ್ಥ
ಆ ಶಬ್ಧಕ್ಕೆ ಬೇಕು ಒಂದು ವಿಶಾಲಾರ್ಥ
ಜನಗಳಿಗೆ ಆದರೆ ಅಪಾರ್ಥ
ಆಗುವುದು ಎಲ್ಲ ಅನರ್ಥ

Kannada Poem


    ಎಲ್ಲಿ ನೋಡಿದರಲ್ಲಿ ಕಾಣುತಿದೆ
    ಬೆಂದು ಹೋದ ನಮ್ಮ ನಾಡು
    ಬಳಲಿ ಬಾಯಾರಿ ಬಸವಳಿಯುತಿದೆ
    ಪಕ್ಷಿ ಪ್ರಾಣಿ ಸಂಕುಲದ ಬೀಡು
                     ಮಳೆ ಮೋಡದ ಸುಳಿವೇ ಇಲ್ಲ
                     ವಿಶಾಲ ನೀಲ ಆಗಸದಲ್ಲಿ
                     ತುಂತುರು ಹನಿಗೂ ಗತಿಯಿಲ್ಲ
                     ರೈತನ ಮೊಗದಲಿ ನಗುವಿಲ್ಲ.
     ಓ ಪ್ರಕೃತಿ ಮಾತೆ ಏಕೆ ಮುನಿದಿರುವೆ
     ಮಳೆ ಸುರಿಸು ಜೀವನವ ಕೊಡಿಸು
    ನಿನ್ನ ದಯೆಗೆ ಇಡೀ ಜೀವಕುಲ ಕಾದಿವೆ
    ಜೀವ ಹೋಗುವ ಮುನ್ನ ದಯಮಾಡಿಸು

A Visit By Karnataka Team of Officers

A team of Educational Officers from Mandya District of Karnataka State visiting our IT Lab(HS Section)