"ಮಾನವನ
ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ
ಶಕ್ತಿ ಭೂಮಿಗಿದೆ. ಆದರೆ
ಅವನ ದುರಾಸೆಗಳನ್ನಲ್ಲ"
ಎ೦ಬ
ಮಾತು ಪ್ರಾನ್ಸ್ ನ ಬೇಕನ್ ಎ೦ಬ
ತತ್ವಜ್ಞಾನಿಯ ಮಾತು ಮನುಷ್ಯನ
ಅಂತರಾಳವನ್ನು ಹೊಕ್ಕಿಲ್ಲ.
ಪ್ರಾಕೃತಿಕ ಅಸಮತೋಲನಕ್ಕೆ
ಮಾನವನ ದುರಾಸೆಯೇ ಮೂಲ ಕಾರಣವಾಗಿದೆ.
ಹಣದ ಆಸೆಗೋಸ್ಕರ ಹಣದ
ಬೆನ್ನು ಹತ್ತುತ್ತಿರುವ ಮಾನವ
ಪ್ರಕೃತ್ತಿಯನ್ನು ನಾಶಗೈಯುತ್ತಾ
ಅಟ್ಟಹಾಸ ಮೆರೆಯುತ್ತಿದ್ದಾನೆ.
ಗಣಿಗಾರಿಕೆ,
ಮರಳುದಂಧೆ, ಅರಣ್ಯಲೂಟಿ,
ನೀರಿನ ಮಾರಾಟ,
ಇವುಗಳನ್ನೆಲ್ಲಾ
ಉಪಯೋಗಿಸಿಕೊಂಡು ಪ್ರಕೃತ್ತಿಯ
ವಿನಾಶಕ್ಕೆ ಕಾರಣವಾಗುತ್ತಾನೆ.
ನಮ್ಮ ಸುಸ್ಥಿರ ಬದುಕಿಗೆ
ಪರಿಸರವಲ್ಲವೇ ಅಡಿಪಾಯ ?
ಪರಿಸರದಲ್ಲಿ
ಒಂದಾಗಿರುವ ಮನುಷ್ಯರು ಪರಿಸರವಿದ್ದರೆ
ಜೀವಿಸಬಹುದು. ಪರಿಸರವೇ
ಇಲ್ಲದಿದ್ದರೆ ಅವರಿಗೆ ಜೀವಿಸಲು
ಸಾದ್ಯವಿಲ್ಲ. ಮರಗಿಡಗಳನ್ನು
ಕಡಿದರೆ ಮೊದಲ ಹಾನಿ ಪ್ರಾಣಿ
ಪಕ್ಷಿಗಳಿಗೆ, . ಬಳಿಕ
ಆ ಹಾನಿ ಮನುಷ್ಯರಿಗೆ ತಟ್ಟುತ್ತದೆ.
